ಶ್ರೀ ಗುರುರಾಯರ 916 ನೇ ಭಜನೆ
ಶ್ರೀ ಗುರುರಾಯರ 916 ನೇ ಭಜನೆ
ಇರುಳಲ್ಲಿ ಮರುಳಲ್ಲಿ ನಡೆಯುತ
ಸೋತು ಸುಣ್ಣಾಗಿರುವೆ ಪ್ರಭುವೆ
ಕೈಹಿಡಿದೆನ್ನ ಮುನ್ನಡೆಸುವ ತಂದೆ
ನೀ ಕಾಣದೆ ಬೆಂದು ಹೋಗಿರುವೆ. |ಪ|
ಕಾಲಚಕ್ರದ ಸೆಳೆವಲಿ ಸಿಲುಕಿರುವ
ಬದುಕಿನ ಪರಿ ನೀನರಿಯೆಯೇನು
ಎನ್ನ ನರಳುವ ಬದುಕಿನ ನೋಟ
ನಿನ್ನ ಕಣ್ಣಿಗೆ ಪ್ರಭುವೆ ಕಾಣದೇನು. |1|
ಒಮ್ಮೊಮ್ಮೆ ಮಿಂಚು ಗುಡುಗಿನಲಿ
ಬದುಕೇ ನಡುಗಿ ಹೋಗಿದೆಯಲ್ಲ
ಅದನೆದುರಿಸುವ ಧೈರ್ಯ ಸಾಲದೆ
ನಿನ್ನ ಮೊರೆಹೋದೆ ಪೊರೆವೆಯಲ್ಲ. |2|
ಕೈಕಾಲು ಧೃಢತೆಯನೇ ಕಳೆದಂತೆ
ಎನ್ನ ಎದೆಯಲ್ಲಿ ನಡುಕ ಹುಟ್ಟಿಸಿದೆ
ನನ್ನೆದೆಯ ವೃಂದಾವನಕೆ ತಂದೆಯೆ
ನೀನು ಬರುವ ಹಾದಿಯನೇ ಕಾಯ್ದೆ. |3|
ಒಂದೊಂದು ಕ್ಷಣದಲ್ಲಿ ತುಂಬಿರುವ
ನೋವಿನ ಪರಿಯನು ಸಹಿಸದಾದೆ
ಪ್ರಭು ರಾಘವೇಂದ್ರ ನಿನ್ನನು ಬಿಟ್ಟು
ಇನ್ನಾರನೂ ನಾನೀಗ ನಂಬದಾದೆ. |4|
ರಚನೆ ಅಚ್ಯುತ ಕುಲಕರ್ಣಿ
Comments
Post a Comment