ಶ್ರೀ ಗುರುರಾಯರ 918 ನೇ ಭಜನೆ
ಶ್ರೀ ಗುರುರಾಯರ 918 ನೇ ಭಜನೆ
ನನ್ನ ಬದುಕಿನ ಪ್ರತಿಕ್ಷಣಕೂ
ಪ್ರಭುವೇ ನಿನ್ನದೇ ಕೃಪೆಯು
ಹೇಗೆ ಬಣ್ಣಿಸಲಿ ಎನ್ನ ತಂದೆ
ನೆಮ್ಮದಿಯೆ ನಿನ್ನ ಜೊತೆಯು. |ಪ|
ನಿನ್ನನು ಮರೆತ ಕ್ಷಣದಿಂದಲೆ
ಘೋರ ಅಂಧತ್ವ ಬದುಕಿಗೆ
ಕೈಹಿಡಿದು ನೀ ನಡೆಸುತಲಿರೆ
ದಿವ್ಯ ಚೇತನ ಪ್ರಾಪ್ತಿ ಎನಗೆ. |1|
ಕಡುಬಿಸಿಲು ಬೇಗೆಯಿಹುದು
ನೀ ಎನ್ನ ಕೈ ಬಿಟ್ಟ ಕ್ಷಣದಿಂದ
ಮನಕೆಲ್ಲ ತಂಪು ಪಡೆದಂತೆ
ಪ್ರಭುವೆ ಕೈ ಹಿಡಿದ ಕ್ಷಣದಿಂದ |2|
ಈ ಜೀವಕೆ ಉಸಿರು ನಿನ್ನ ಭಕ್ತಿ
ಎಂದು ನಾ ಸದಾ ಅರಿತಿರುವೆ
ಬದುಕಿನ ರಾಗ ತಾಳಕೆ ಸ್ಫೂರ್ತಿ
ನಿನ್ನ ಕೃಪೆಯ ಉಪಕಾರವೇ. |3|
ನಿನ್ನ ನೆರಳಲ್ಲಿಯೇ ಜೀವನವು
ಸದಾ ನಡೆಯುತ್ತ ಸಾಗುತಿರಲಿ
ನಿನ್ನ ಮರೆಯದ ಮನ ಎಂದೂ
ಸದಾ ಎನ್ನ ಪಾಲಿಗೆ ದೊರಕಲಿ. |4|
ರಚನೆ ಅಚ್ಯುತ ಕುಲಕರ್ಣಿ
Comments
Post a Comment