ಶ್ರೀ ಗುರುರಾಯರ 918 ನೇ ಭಜನೆ

ಶ್ರೀ ಗುರುರಾಯರ 918 ನೇ ಭಜನೆ


ನನ್ನ ಬದುಕಿನ ಪ್ರತಿಕ್ಷಣಕೂ
ಪ್ರಭುವೇ ನಿನ್ನದೇ ಕೃಪೆಯು
ಹೇಗೆ ಬಣ್ಣಿಸಲಿ ಎನ್ನ ತಂದೆ
ನೆಮ್ಮದಿಯೆ ನಿನ್ನ ಜೊತೆಯು.     |ಪ|

ನಿನ್ನನು ಮರೆತ ಕ್ಷಣದಿಂದಲೆ
ಘೋರ ಅಂಧತ್ವ ಬದುಕಿಗೆ
ಕೈಹಿಡಿದು ನೀ ನಡೆಸುತಲಿರೆ
ದಿವ್ಯ ಚೇತನ ಪ್ರಾಪ್ತಿ ಎನಗೆ.       |1|

ಕಡುಬಿಸಿಲು ಬೇಗೆಯಿಹುದು
ನೀ ಎನ್ನ ಕೈ ಬಿಟ್ಟ ಕ್ಷಣದಿಂದ
ಮನಕೆಲ್ಲ ತಂಪು ಪಡೆದಂತೆ
ಪ್ರಭುವೆ ಕೈ ಹಿಡಿದ ಕ್ಷಣದಿಂದ       |2|

ಈ ಜೀವಕೆ ಉಸಿರು ನಿನ್ನ ಭಕ್ತಿ
ಎಂದು ನಾ ಸದಾ ಅರಿತಿರುವೆ
ಬದುಕಿನ ರಾಗ ತಾಳಕೆ ಸ್ಫೂರ್ತಿ
ನಿನ್ನ ಕೃಪೆಯ ಉಪಕಾರವೇ.         |3|

ನಿನ್ನ ನೆರಳಲ್ಲಿಯೇ ಜೀವನವು
ಸದಾ ನಡೆಯುತ್ತ ಸಾಗುತಿರಲಿ
ನಿನ್ನ ಮರೆಯದ ಮನ ಎಂದೂ
ಸದಾ ಎನ್ನ ಪಾಲಿಗೆ ದೊರಕಲಿ.      |4|

ರಚನೆ ಅಚ್ಯುತ ಕುಲಕರ್ಣಿ

Comments

Popular posts from this blog

ಶ್ರೀ ಗುರುರಾಯರ 917 ನೇ ಭಜನೆ

|| ಬರ್ತಡೇ ||

ವಿಷ್ಣು ಅಷ್ಟೋತ್ತರ: ಓಂ ಕೇಶವಾಯ ನಮಃ