ಶ್ರೀ ಗುರುರಾಯರ 917 ನೇ ಭಜನೆ

ಶ್ರೀ ಗುರುರಾಯರ 917 ನೇ ಭಜನೆ


ಕೈಹಿಡಿದು ಮುನ್ನಡೆಸುವ ಪ್ರಭು
ಇನ್ನೂ ಕೋಪವೇ ಎನ್ನ ಮೇಲೆ
ಅಳಿಸಿ ಈ ಮನದ ದುಗುಡವನು
ತೋರು ಬದುಕಿಗೆ ನಿನ್ನ ಲೀಲೆ.         |ಪ|

ಕಾರ್ಮೋಡದಂಥ ಕಷ್ಟಗಳನೆಲ್ಲ
ನಿಮಿಷದಲಿ ಚದುರಿಸಿದೆ ಅಂದು
ಮುಂದೆ ದಾರಿ ಕಾಣದೆ ಕುಳಿತ
ಭಕ್ತನಿಗೆ ದಾರಿ ತೋರು ಇಂದು.         |1|

ನೀ ಕೈಹಿಡಿದ ಧೈರ್ಯಕೆ ನಾನು
ಬದುಕಲ್ಲಿ ಮುಂದೆ ಸಾಗಿದವನು
ಇಂದು ನಡುಹಾದಿಯಲಿ ಬಿಟ್ಟರೆ
ಯಾರ ಮೊರೆ ಹೋಗಲಿ ಇನ್ನು.         |2|

ಬದುಕೊಂದು ವಿಧಿಯಾಟವಿರೆ
ನೀ ಮಾತ್ರ ಬದಲಿಸಬಲ್ಲೆಯಲ್ಲ
ನೀನೂ ಕೇಳದೆ ಹೋದರೆ ಇನ್ನು
ವಿಧಿಗೆ ತಲೆಬಾಗಿಸಬೇಕಾಯಿತಲ್ಲ.       |3|

ಇಷ್ಟು ದಿನ ಬದುಕಿನ ದೋಣಿಗೆ
ನಾವಿಕನಾಗಿ ಮುನ್ನಡೆಸಿದೆ ತಂದೆ
ನಡುನೀರಿನಲ್ಲಿಯೆ ಬಿಟ್ಟುಬಿಟ್ಟರೆ
ಮುಳುಗದೆ ಬೇರೆ ದಾರಿ ಎಲ್ಲಿದೆ.         |4|

ರಚನೆ ಅಚ್ಯುತ ಕುಲಕರ್ಣಿ

Comments

Popular posts from this blog

|| ಬರ್ತಡೇ ||

ವಿಷ್ಣು ಅಷ್ಟೋತ್ತರ: ಓಂ ಕೇಶವಾಯ ನಮಃ