ಶ್ರೀ ಗುರುರಾಯರ 918 ನೇ ಭಜನೆ
ಶ್ರೀ ಗುರುರಾಯರ 918 ನೇ ಭಜನೆ ನನ್ನ ಬದುಕಿನ ಪ್ರತಿಕ್ಷಣಕೂ ಪ್ರಭುವೇ ನಿನ್ನದೇ ಕೃಪೆಯು ಹೇಗೆ ಬಣ್ಣಿಸಲಿ ಎನ್ನ ತಂದೆ ನೆಮ್ಮದಿಯೆ ನಿನ್ನ ಜೊತೆಯು. |ಪ| ನಿನ್ನನು ಮರೆತ ಕ್ಷಣದಿಂದಲೆ ಘೋರ ಅಂಧತ್ವ ಬದುಕಿಗೆ ಕೈಹಿಡಿದು ನೀ ನಡೆಸುತಲಿರೆ ದಿವ್ಯ ಚೇತನ ಪ್ರಾಪ್ತಿ ಎನಗೆ. |1| ಕಡುಬಿಸಿಲು ಬೇಗೆಯಿಹುದು ನೀ ಎನ್ನ ಕೈ ಬಿಟ್ಟ ಕ್ಷಣದಿಂದ ಮನಕೆಲ್ಲ ತಂಪು ಪಡೆದಂತೆ ಪ್ರಭುವೆ ಕೈ ಹಿಡಿದ ಕ್ಷಣದಿಂದ |2| ಈ ಜೀವಕೆ ಉಸಿರು ನಿನ್ನ ಭಕ್ತಿ ಎಂದು ನಾ ಸದಾ ಅರಿತಿರುವೆ ಬದುಕಿನ ರಾಗ ತಾಳಕೆ ಸ್ಫೂರ್ತಿ ನಿನ್ನ ಕೃಪೆಯ ಉಪಕಾರವೇ. |3| ನಿನ್ನ ನೆರಳಲ್ಲಿಯೇ ಜೀವನವು ಸದಾ ನಡೆಯುತ್ತ ಸಾಗುತಿರಲಿ ನಿನ್ನ ಮರೆಯದ ಮನ ಎಂದೂ ಸದಾ ಎನ್ನ ಪಾಲಿಗೆ ದೊರಕಲಿ. |4| ರಚನೆ ಅಚ್ಯುತ ಕುಲಕರ್ಣಿ